ಪ್ರಾಂಶುಪಾಲರ ಸಂದೇಶ:

ಶಿಕ್ಷಣವು ಸಾಮಾಜಿಕ ಬದಲಾವಣೆಯ ಸಾಧನವಾಗಿ ವ್ಯಕ್ತಿತ್ವದ ಬೆಳವಣಿಗೆ ಮತ್ತು ನಡತೆಯ ನಿರ್ಮಾಣವನ್ನು ಮಾಡುವ ನಿರ್ಣಾಯಕ ಪಾತ್ರವನ್ನು ವಹಿಸುವುದಷ್ಟೇ ಅಲ್ಲದೇ ವ್ಯಕ್ತಿಯು ಆತ್ಮವಿಶ್ವಾಸ ಮತ್ತು ನಿರ್ಧಾರದೊಂದಿಗೆ ಜೀವನದ ಸವಾಲುಗಳನ್ನು ಎದುರಿಸಲು ಸಿದ್ಧಪಡಿಸುತ್ತದೆ. ಶಿಕ್ಷಕರ ಗುಣಮಟ್ಟವು ಶಿಕ್ಷಕ ತರಬೇತಿಯ ಗುಣಮಟ್ಟವನ್ನು ಅವಲಂಬಿಸಿರುತ್ತದೆ ಎಂದು ನಾನು ನಂಬಿದ್ದೇನೆ. ಎನ್.ಸಿ.ಟಿ.ಇ ಹೇಳಿರುವಂತೆ ಮಾಧ್ಯಮಿಕ ಶಿಕ್ಷಕ ತರಬೇತಿ ಕಾರ್ಯಕ್ರಮದಲ್ಲಿ ನಮ್ಮ ಸಂಸ್ಥೆಯು ಸೈದ್ಧಾಂತಿಕ ಮತ್ತು ಪ್ರಾಯೋಗಿಕ ತರಬೇತಿಯನ್ನು ಸಮರ್ಥವಾಗಿ ಒದಗಿಸುತ್ತಿದೆ. ನಮ್ಮ ಕಾಲೇಜಿನ ಪ್ರಾಧ್ಯಾಪಕರುಗಳು ಹೆಚ್ಚಿನ ಅರ್ಹತೆಯನ್ನು ಹೊಂದಿದ್ದಾರೆ ಮತ್ತು ಗುರಿ ಉದ್ದೇಶಗಳ ಸಾಧನೆಗಾಗಿ ಕಂಕಣ ಬದ್ಧರಾಗಿದ್ದಾರೆ. ಎಲ್ಲಾ ಯುವ ಪ್ರತಭಾನ್ವಿತ ಪದವೀದರ ವಿದ್ಯಾರ್ಥಿಗಳನ್ನು ನಮ್ಮ ಸಂಸ್ಥೆಯಲ್ಲಿರುವ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಲು ಮತ್ತು ಆನಂದಿಸಲು ನಾನು ಸ್ವಾಗತಿಸುತ್ತೆÃನೆ. ನಾನು ಅವರಿಗೆ ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಭಿವೃದ್ಧಿಯ ದಿನಗಳನ್ನು ಹಾರೈಸುತ್ತೇನೆ.

ಈ.ರುದ್ರಮುನಿ.
ಪ್ರಾಂಶುಪಾಲರು
ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯ
ಚಿತ್ರದುರ್ಗ